ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report
ಮಂಗಳೂರು -ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಕಳೆದ 9 ವರ್ಷ 4 ತಿಂಗಳ ಕಾಲ ಬಿಲ್ಲವ ಸಮುದಾಯದ ಮತ್ತು ಎಂಎಲ್ ಸಿ ಯೂ ಆಗಿದ್ದ ಬೆಳ್ತಂಗಡಿಯ ಹರೀಶ್ ಕುಮಾರ್ ಅವರು ಅಧ್ಯಕ್ಷರಾಗಿದ್ದರು. ಅದಕ್ಕೆ ಮೊದಲು,ಬಂಟ ಸಮುದಾಯದ ಬಿ. ರಮಾನಾಥ ರೈ ಅವರು10 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮುಸ್ಲಿಂ ಸಮುದಾಯದ ಇಬ್ರಾಹಿಂ ಕೋಡಿಜಾಲ್ ಅವರು ಪ್ರಭಾರ ಅಧ್ಯಕ್ಷರಾಗಿದ್ದರು.ಕ್ರೈಸ್ತ ಸಮುದಾಯದಿಂದ 25 ವರ್ಷಗಳ ಹಿಂದೆ ಬ್ಲೇಸಿಯಸ್ ಡಿ ಸೋಜ ಅವರು ಅಧ್ಯಕ್ಷರಾಗಿದ್ದು ಬಿಟ್ಟರೆ ಇಲ್ಲಿ ತನಕ ಯಾರೂ ಆಗಿಲ್ಲ. ಆದರೆ, ಈ ಸಲ ಪ್ರಪ್ರಥಮ ಬಾರಿಗೆ ಕ್ರೈಸ್ತ ಸಮುದಾಯದ ಒಮ್ಮತದ ಅಭ್ಯರ್ಥಿಯಾಗಿ ಪಿಯುಸ್ ಎಲ್ ರೋಡ್ರಿಗಸ್ ಅವರು ಜಿಲ್ಲಾ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ ಬಯಸಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದಾರೆ. ಕೇರಳದ ಕೋಯಿಕ್ಕಾಡ್ ಎಂಎಲ್ ಎ ಜಯಂತ್ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುನಾವಣಾ ವೀಕ್ಷಕರಾಗಿದ್ದಾರೆ. ವೀಕ್ಷಕರ ಸಮೀಕ್ಷೆ ವೇಳೆ,ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯ ತಾಲೂಕುಗಳಾದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ,ಪುತ್ತೂರು, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ ಹಾಗೂ ಮಂಗಳೂರುಗಳ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು,ನಾಯಕರುಗಳ ಅಭಿಪ್ರಾಯಗಳು ಬಂದಿರುತ್ತವೆ.ಅವರೆಲ್ಲರೂ ಪಿಯುಸ್ ರೋಡಿಗ್ರಸ್ ಅವರೇ ಅಧ್ಯಕ್ಷರಾಗಬೇಕು ಎಂದು ಬಹುಮತದ ಅಭಿಪ್ರಾಯ ವ್ಯಕ್ತ ಪಡಿಸಿರುವ ಬಗ್ಗೆ ಸ್ಕೂಪ್ ಮಾಹಿತಿಯೊಂದು ಸ್ಪಷ್ಟವಾಗಿ mpmlasnewstvಗೆ ಲಭ್ಯವಾಗಿದೆ .ಬೈಲಾ ಪ್ರಕಾರ,ಜಿಲ್ಲಾ ಕಾಂಗ್ರೆಸ್ ಗೆ ಅಧ್ಯಕ್ಷರಾಗುವವರು ಮೂರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.ಈ ಕಾರಣಕ್ಕೆ ಜೆ. ಆರ್. ಲೋಬೋ ಅವರು ಅಧ್ಯಕ್ಷ ಸ್ಥಾನ ಬಯಸಿ ಅರ್ಜಿ ಹಾಕಿಲ್ಲ,.ಐವನ್ ಡಿಸೋಜ ಅವರು ಎಂಎ ಲ್ ಸಿಯಾಗಿದ್ದು, ಅಧ್ಯಕ್ಷರಾಗಲು ಇಚ್ಚಿಸಿದರೂ ಒಬ್ಬರಿಗೆ ಎರಡೆರಡು ಹುದ್ದೆಗಳನ್ನು ನೀಡುವಂತಿಲ್ಲ.ನವೀನ್ ಡಿಸೋಜ ಅವರಿಗೆ ಇತ್ತೀಚೆಗಷ್ಟೇ ರಾಜ್ಯ ಸಭಾ ಸದಸ್ಯ ಅವಕಾಶ ಕೂದಲೆಳೆಯಂತರದಲ್ಲಿ ಕೈ ತಪ್ಪಿ ಹೋಗಿತ್ತು. ಮಹಾನಗರ ಪಾಲಿಕೆ ಚುನಾವಣೆ ಡಿಸೆಂಬರ್ ತಿಂಗಳೊಳಗೆ ಬರಲಿದ್ದು,ಈ ಸಲ ಕಾಂಗ್ರೆಸ್ ಬಂದರೆ ನವೀನ್ ಡಿ ಸೋಜ ಮೇಯರ್ ಆಗುವುದು ಗ್ಯಾರಂಟಿ.ಅದಕ್ಕೆಕಾರ್ಪೊರೇಟರ್ ಚುನಾವಣೆ ಸ್ಪರ್ಧಿಸಬೇಕಾಗುತ್ತದೆ. ಈ ಕಾರಣಕ್ಕೆ ನವೀನ್ ಡಿ ಸೋಜ ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿಯಲಿದ್ದಾರೆಂಬ ಸುದ್ದಿ ಇದೆ.ಇದರ ಬಗ್ಗೆ ಕೇಳಲು mpmlasnewstv ಅವರನ್ನೂ ಪೋನ್ ಮೂಲಕ ಸಂಪರ್ಕಿಸಲು ಹೊರಟಾಗ ಅವರು ಫೋನ್ ಕರೆ ಸ್ವೀಕರಿಸಲಿಲ್ಲ . ಪ್ರಸ್ತುತ ಪರಿಸ್ಥಿತಿ ಹೀಗಿರುವಾಗ ಕೈಸ್ತ ಸಮುದಾಯದ ಅಧ್ಯಕ್ಷಗಿರಿಯ ರೇಸ್ ನಲ್ಲಿ ಪಿಯೂಸ್ ರೋಡ್ರಿಗಸ್ ಒಬ್ಬರೇ ಇದ್ದಾರೆ. ಇವರೇ ಅಧ್ಯಕ್ಷರಾಗಬೇಕು ಎಂದು ಸುಮಾರು ಏಳು ತಿಂಗಳ ಹಿಂದೆಯೇ ಪಿಯುಸ್ ಎಲ್. ರೋಡ್ರಿಗಸ್ ಪರ ಪ್ರಬಲವಾದ ಅಲೆ ಎದ್ದಿತ್ತು. ಇದನ್ನು mpmlasnewstv ವರದಿ ಕೂಡಾ ಮಾಡಿತ್ತು. ಇದೀಗ ಅಧ್ಯಕ್ಷೀಯ ಚುನಾವಣೆಯಲ್ಲಿ 50 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಹೇಮಾನಾಥ ಶೆಟ್ಟಿ ಕಾವ,ಶಶಿಧರ್ ಹೆಗ್ಡೆ,ಚಂದ್ರಪ್ರಕಾಶ್ ಶೆಟ್ಟಿ,ಮಿಥುನ್ ರೈ, ಪದ್ಮರಾಜ್ ಆರ್. ಪೂಜಾರಿ,, ಎಂ. ಎಸ್. ಮೊಹಮ್ಮದ್, ಲಾವಣ್ಯ ಜೈನ್ ಮೊದಲಾದ ಸ್ಪರ್ಧಿಗಳ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಇವೆರಲ್ಲರ ಮಧ್ಯೆ ಪಿಯುಸ್ ಎಲ್.ರೋಡ್ರಿಗಸ್ ಹೆಸರು ಮುಂಚೂಣಿಯಲ್ಲಿದ್ದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ವೇಳೆ ವೀಕ್ಷಕರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಪಿಯುಸ್ ಎಲ್ ರೋಡ್ರಿಗಸ್ ಅವರೇ ಅಧ್ಯಕ್ಷರಾಗಬೇಕು ಎಂಬ ಒಮ್ಮತದ ಅಭಿಪ್ರಾಯದ ರೂಪದಲ್ಲಿ ವ್ಯಕ್ತವಾಗಿದೆ. ಈ ಸಲ ಅಧ್ಯಕ್ಷ ಸ್ಥಾನದ ಪ್ರಕ್ರಿಯೆ ವಿನೂತನವಾಗಿ ಕಾರ್ಯಕರ್ತರ ಒಟ್ಟು ಅಭಿಪ್ರಾಯವನ್ನು ಆಧರಿಸಿ ನಡೆಯಲಿದೆ. ಇದಕ್ಕೆ ಮೊದಲು ವಸೂಲಿಬಾಜಿ, ಪ್ರಭಾವ, ಲಾಬಿ ನಡೆಸಿ ಅಧ್ಯಕ್ಷರಾಗುತ್ತಿದ್ದರು ಆದರೆ, ಈಗ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರ ಆಶಯದಂತೆ ಇದೊಂದು ಪಾರದರ್ಶಕ ಪ್ರಕ್ರಿಯೆಯಾಗಿದೆ. ಪಕ್ಷದ ಕಾರ್ಯಕರ್ತರ ಒಮ್ಮತದ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ಅದರಲ್ಲಿ 6ಮಂದಿ ಆಕಾಂಕ್ಷಿ ಗಳನ್ನು ಆಯ್ಕೆ ಮಾಡಿ ಕೊನೆಗೆ ಅವರ ಪೈಕಿ, ಒಬ್ಬರು ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಾಧುನಿಕ ಚುನಾವಣಾ ಪ್ರಕ್ರಿಯೆ ಇದಾಗಿದೆ. ಈ ರೀತಿ ರಾಜ್ಯದ ಹೆಚ್ಚು ಕಡಿಮೆ 40 ಸಮರ್ಥ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಿ ಇನ್ನು ಒಂದೂವರೆ ವರ್ಷಗಳಲ್ಲಿ ಬರುವ ವಿಧಾನಸಭಾ ಚುನಾವಣೆಗೆ ಈಗಲೇ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಿ ಕರ್ನಾಟಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರ ಗದ್ದುಗೆ ಏರುವ ಚಾಣಕ್ಯ ತಂತ್ರ ಕಾಂಗ್ರೆಸ್ ಹೈಕಮಾಂಡ್ ನ ಬತ್ತಳಿಕೆಯಲ್ಲಿದೆ . ಒಟ್ಟಿನಲ್ಲಿ ರಾಜ್ಯ ನಾಯಕರ ಮತ್ತು ಕಾರ್ಯಕರ್ತರ ಒಟ್ಟು ಅಭಿಪ್ರಾಯದ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು Mpmlasnewstv ನಡೆಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಚುನಾವಣಾ ಆಯ್ಕೆ ಪ್ರಕಿಯೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಹೊರ ಬಿದ್ದಿದೆ.ದಕ್ಷಿಣ ಕನ್ನಡದಲ್ಲಿ ಈ ಸಲ ಅಲ್ಪ ಸಂಖ್ಯಾತ ಸಮುದಾಯದ ಮತ್ತು ಅದಕ್ಕಿಂತ ಕೆಳಗಿನ ಜಾತಿ ಸಮುದಾಯದ ಸಮರ್ಥ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ವೀಕ್ಷಕರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲ ಧ್ವನಿ ಒತ್ತಾಯಿಸಿದೆ. ಉಡುಪಿಯಲ್ಲಿ ಡಜನ್ ಗಟ್ಟಲೆ ಬಂಟ ಅಭ್ಯರ್ಥಿಗಳಿದ್ದು ಅಲ್ಲಿ ಬಂಟ ಅಭ್ಯರ್ಥಿ ಆಯ್ಕೆಯಾದರೆ ದಕ್ಷಿಣ ಕನ್ನಡದಲ್ಲಿ ಬಂಟರಿಗೆ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಅದೇನೇ ಇರಲಿ, ಅಧ್ಯಕ್ಷ ಸ್ಥಾನ ಬಂಟ, ಬಿಲ್ಲವ ಸಮುದಾಯದವರನ್ನು ಹೊರತು ಪಡಿಸಿ ಅಲ್ಪ ಸಂಖ್ಯಾತ ಸಮುದಾಯದ ಕ್ರಿಶ್ಚಿಯನ್, ಮುಸ್ಲಿಂ ಅಭ್ಯರ್ಥಿಗೆ. ನೀಡಬೇಕು ಇಲ್ಲವೇ ಅದಕ್ಕಿಂತ ಕೆಳಗಿನ ಸಮುದಾಯದ ಅಭ್ಯರ್ಥಿಗೆ ನೀಡಬೇಕು ಎಂದು ವೀಕ್ಷರ ಗಮನ ಸೆಳೆದು ಒತ್ತಾಯಿಸಲಾಗಿದೆ.









