Author name: editor

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠ-ಅಯುಧ್ ಮಂಗಳೂರು ಇವರಿಂದ ವಿಶ್ವ ಪರಿಸರ ದಿನಾಚರಣೆ.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಯುವ ಸೇವಾ ವಿಭಾಗ ಅಯುಧ್ ಮಂಗಳೂರು ಇವರಿಂದ ನಗರದ ಬೊಕ್ಕಪಟ್ನದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರದಿನವನ್ನು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಆಯುಷ್ ಇಲಾಖೆಯ ನಿವೃತ್ತ ಅಧಿಕಾರಿ ಡಾ.ದೇವದಾಸ್ ಪುತ್ರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಠದ ಯುವ ಸೇವಾ ವಿಭಾಗವಾದ “ಅಯುಧ್” ಮೂಲಕ ವಿಶ್ವದಾದ್ಯಂತ ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸ್ಪೂರ್ತಿ ನೀಡುತ್ತಿದ್ದಾರೆ.ಅಮ್ಮನವರ ಅನುಗ್ರಹದೊಂದಿಗೆ ಅಯುಧ್ ಮಂಗಳೂರು ತಂಡವು ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಗಾಗಿ ಅಮಲ ಭಾರತ ಸ್ವಚ್ಛತಾ ಜನಜಾಗರಣ ಅಭಿಯಾನ, ಗಿಡಗಳನ್ನು ಬೆಳೆಸುವುದು, ಬೀಜದ ಉಂಡೆಗಳನ್ನು ಮಾಡಿ ಉಪಯುಕ್ತ ಫಲಗಳ ಮರಗಳು ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದರು. ಮಕ್ಕಳಿಗೆ ಬಾಲ್ಯದಲ್ಲೇ ಔಷಧೋಪಯೋಗಿ ಸಸ್ಯಗಳ ಪರಿಚಯವನ್ನು ಮಾಡಿ ಅದರ ಉಪಯೋಗದ ಮಾಹಿತಿ ನೀಡಿದಲ್ಲಿ ಪ್ರಾಥಮಿಕ ಆರೋಗ್ಯ ಸಮಸ್ಯೆ ಹಾಗೂ ಸ್ವಾಸ್ಥ್ಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ನುಡಿದರು. ಅಮೃತ ಜ್ಯೋತಿ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿರುವ ಸಸ್ಯದ ಬೀಜವನ್ನೊಳಗೊಂಡ ಪರಿಸರಸ್ನೇಹಿ ಪೆನ್ಸಿಲ್ ಬಗ್ಗೆ ಮಾಹಿತಿ ನೀಡಿದರು.ಈ ಶಾಲೆಯಲ್ಲಿಮುಂದೆ ಅಡುಗೆಗೆ ಉಪಯುಕ್ತವಾಗುವ ತರಕಾರಿ ಗಿಡಗಳನ್ನು ಬೆಳೆಸುವ ಯೋಜನೆ ಇದೆ ಎಂದರು.ಈ ಸಂದರ್ಭದಲ್ಲಿ ಸಸಿಗಳನ್ನು ಹಾಗೂ ಬೀಜಯುಕ್ತ ಪೆನ್ಸಿಲ್ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ರವರ ನಿರ್ದೇಶನದಂತೆ ನಡೆದ ಈ ಕಾರ್ಯಕ್ರಮದಲ್ಲಿಶಾಲಾಮುಖ್ಯ ಶಿಕ್ಷಕಿ ಡ್ರೆಸಿಲ್ ಲಿಲ್ಲಿ ಮೆನೆಜಸ್,ಅಯುಧ್ ಅಧ್ಯಕ್ಷರಾದ ಅಡ್ವೊಕೇಟ್ ಸ್ವಸ್ತಿ ಶೆಟ್ಟಿ,ಕಾರ್ಯದರ್ಶಿ ಡಾ.ರಿಷಿಕೇಶ್ ಪ್ರೇಮರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ವೀಣಾ ಧಾರಿಣಿ ನಿರೂಪಿಸಿದರು.ಅಯುಧ್ ಸದಸ್ಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ರೆಡ್ ಕ್ರಾಸ್ ವತಿಯಿಂದ ಪರಿಸರ ದಿನಾಚರಣೆ. ‘ಪೃಥ್ವಿಯ ಉಳಿವಿಗೆ ಪ್ಲಾಸ್ಟಿಕ್ ನಿರ್ಮೂಲನೆ ಅಗತ್ಯ’-ಡಾ.ಆರ್.ಕೆ.ನಾಯರ್

ಮಂಗಳೂರು: ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯಾಗದಿದ್ದರೆ ಪೃಥ್ವಿಯ ಅವನತಿಯೂ ಸನಿಹವಾಗಲಿದೆ. ಪರಿಸರ ಸಂರಕ್ಷಣೆಯಾದಲ್ಲಿ ಮಾತ್ರ ಮನುಷ್ಯನ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಪರಿಸರವಾದಿ, ಗುಜರಾತ್ ನ ಸ್ಮೃತಿ ವನದ ರೂವಾರಿ ಡಾ.ಆರ್.ಕೆ.ನಾಯರ್ ಹೇಳಿದರು.ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಗುರುವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರುಯುವಜನತೆ, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಆಂದೋಲನದ ರೀತಿಯಲ್ಲಿ ಪಣ ತೊಡಬೇಕು. ರೆಡ್ ಕ್ರಾಸ್ ಸಂಸ್ಥೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು. ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಡಾ. ಸಚ್ಚಿದಾನಂದ ರೈ, ಎ.ವಿಠ್ಠಲ, ಡಾ.ಸುಮನಾ ಬೋಳಾರ್, ಸಲಹೆಗಾರರಾದ ಪ್ರಭಾಕರ ಶರ್ಮ, ಕೆ.ಎನ್. ಸುಧಾಕರ, ಸದಸ್ಯರಾದ ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಡ್ಮಿನ್ ಅಧಿಕಾರಿ ಸ್ಮಿತಾ ಶೆಣೈ ಉಪಸ್ಥಿತರಿದ್ದರು.ರೆಡ್ ಕ್ರಾಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಸ್ವಾಗತಿಸಿ, ನಿರ್ದೇಶಕ ಗುರುದತ್ ನಾಯಕ್ ವಂದಿಸಿದರು. ಪಿ.ಬಿ. ಹರೀಶ್ ರೈ ನಿರೂಪಿಸಿದರು. ಮುಖ್ಯ ಅತಿಥಿಗಳು ಮತ್ತು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೆಡ್ ಕ್ರಾಸ್ ಕಚೇರಿ ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಇದೇ ಸಂದರ್ಭ ಡಾ.ಆರ್.ಕೆ.ನಾಯರ್ ಅವರನ್ನು ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಜೂನ್ 7ಮತ್ತು 8ರಂದು ಮಂಗಳೂರಿನ ಅವತಾರ ಹೋಟೆಲ್ ನಲ್ಲಿ RSAMDIO ಪದಗ್ರಹಣ ಸಮಾರಂಭ

ಮಂಗಳೂರು -ರೋಟಾರೆಕ್ಟ್ ಎಂಬುದು ರೋಟರಿ ಇಂಟರ್‌ನ್ಯಾಷನಲ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ, ನಾಯಕತ್ವ, ಸೇವೆ ಮತ್ತು ಸ್ನೇಹ ಸಂಬಂಧಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲಿರುವ ಯುವ ನಾಯಕರ ಜಾಗತಿಕ ಚಲನೆಯಾಗಿದೆ. ದಕ್ಷಿಣ ಏಷ್ಯಾದ ರೋಟಾರೆಕ್ಟ್ ಚಟುವಟಿಕೆಗಳ ಕೇಂದ್ರಬಿಂದು RSAMDIO – ರೋಟಾರೆಕ್ಟ್ ಸೌತ್ ಏಷಿಯಾ ಮಲ್ಟಿ-ಡಿಸ್ಟ್ರಿಕ್ಟ್ ಇನ್‌ಫರ್ಮೇಶನ್ ಆರ್ಗನೈಸೇಷನ್, ಇದು 8 ದೇಶಗಳು ಮತ್ತು 44 ಸದಸ್ಯ ಜಿಲ್ಲೆಗಳನ್ನು ಒಳಗೊಂಡಿದೆ, ಹಾಗೂ 79,000 ಕ್ಕೂ ಹೆಚ್ಚು ರೋಟಾರೆಕ್ಟರ್‌ಗಳು ಇದರ ಭಾಗವಾಗಿದ್ದಾರೆ.ಈ ಸಂಭ್ರಮದಲ್ಲಿ, 2025–26ನೇ ಸಾಲಿನ RSAMDIO ಇನ್‌ಸ್ಟಾಲೇಶನ್ ಸಮಾರಂಭ – ITTEHAD ಹಾಗೂ ROAR (RSAMDIO ಉತ್ತಮ ಪ್ರಶಸ್ತಿ ಪ್ರಧಾನ) ಜೂನ್ 7 ಮತ್ತು 8, 2025 ರಂದು ಸಂಜೆ 3:30 ಗಂಟೆಯಿಂದ ಆರಂಭವಾಗಿ ಮಂಗಳೂರಿನ ಆವತಾರ್ ಹೋಟೆಲ್‌ನಲ್ಲಿ ಜರುಗಲಿದೆಂದು ಡಾ.ಬಿ.ದೇವದಾಸ್ ರೈಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಸಮಾರಂಭ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ. ಇನ್ನೊಂದು ಹೆಮ್ಮೆಯ ಸಂಗತಿ ಎಂದರೆ, RSAMDIO ಗೆ ಅಧ್ಯಕ್ಷರಾಗಿ ಕರ್ನಾಟಕದಿಂದ ಆಯ್ಕೆ ಆದವರಲ್ಲಿ ಡೇರಲ್ ಎರಡನೆಯವರು., ಹಾಗೂ ಅವರು ಈ ಸಂಸ್ಥೆಯ 16ನೇ ಅಧ್ಯಕ್ಷರಾಗಲಿದ್ದಾರೆಂದವರು ಹೇಳಿದರು.3 ದೇಶಗಳು ಮತ್ತು 23 ರಾಜ್ಯಗಳಿಂದ 250 ಕ್ಕೂ ಹೆಚ್ಚು ರೋಟಾರೆಕ್ಟ್ ಪ್ರತಿನಿಧಿಗಳು ಭಾಗವಹಿಸಲಿರುವ ಈ 2 ದಿನಗಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟರಿ ಇಂಟರ್‌ನ್ಯಾಷನಲ್ ಡೈರೆಕ್ಟರ್ ಅನಿರುದ್ಧ ರಾಯ್ ಚೌಧುರಿ ಅವರು ಭಾಗವಹಿಸಿ ಪ್ರಧಾನ ಭಾಷಣ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ RI ಜಿಲ್ಲೆ 3181 ರ ಜಿಲ್ಲಾ ಗವರ್ನರ್ Rtn. ವಿಕ್ರಮದತ್ತ ಅವರು ಭಾಗವಹಿಸಲಿದ್ದಾರೆ. ITTEHAD 2025 ಕಾರ್ಯಕ್ರಮವು ನಾಯಕತ್ವ, ಸಂಸ್ಕೃತಿ ಮತ್ತು ಸೇವೆಯ ಮಹತ್ವದ ಉತ್ಸವವಾಗಲಿದೆ. ಕರಾವಳಿಯ ಹೃದಯ ಮಂಗಳೂರು ನಗರವು ಈ ಪ್ರತಿಷ್ಟಿತ ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದು ಇತಿಹಾಸ ನಿರ್ಮಾಣದ ಕ್ಷಣವನ್ನು ಎದುರಿಸುತ್ತಿದೆಂದು ಡಾ.ದೇವದಾಸ್ ರೈಯವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಎಂ.ವಿ. ಮಲ್ಯ, ಭಾಸ್ಕರ್ ರೈ – ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷರು; ಪಿಡಿಜಿ ಎಂಡಿ ಡಾ. ಬಿ. ದೇವದಾಸ್ ರೈ – Chairman, ಮಂಗಳೂರು ನಗರದ ರೋಟರಾಕ್ಟ್ ಕ್ಲಬ್‌ನ; ಮತ್ತು ಪಿಡಿಆರ್‌ಆರ್ ಎಂದು ಪಿಎಚ್‌ಎಫ್ ಡ್ಯಾರಿಲ್ ಸ್ಟೀವನ್ ಡಿಸೋಜಾ – ರೋಟರಾಕ್ಟ್ ದಕ್ಷಿಣ ಏಷ್ಯಾ ಎಂಡಿಐಒದ ಚುನಾಯಿತ ಅಧ್ಯಕ್ಷರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.Photo- sathish Kapikad

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ಗೌರವಾಧ್ಯಕ್ಷರಾಗಿ ಎಂಎಲ್‌ಸಿ ಐವನ್ ಡಿಸೋಜ ಆಯ್ಕೆ

ಮಂಗಳೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಬೆಂಗಳೂರು ಇದರ ರಾಜ್ಯದ ಮಹಾ ಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಗಯ್ಯ ಅವರ ಘನ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಸಂಚಾಲಕರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರನ್ನು ವೇದಿಕೆಯ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ದ.ಕ ಜಿಲ್ಲಾ ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ಪದಾಧಿಕಾರಿಗಳು ಮತ್ತು‌ವೇದಿಕೆಯ ನಿವೃತ್ತ ಸರಕಾರಿ ನೌಕರರು ಅವರಿಗೆ ಶುಭ ಹಾರೈಸುವ ಜತೆಗೆ ತಮ್ಮ ವೇದಿಕೆಯ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಸಲ್ಲಿಸಿದರು.

ಪ್ರಾದೇಶಿಕ ವಾರ್ತೆಗಳು

ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಮಾರಕ -ಆರ್.ಕೆ.ನಾಯರ್

ಮಂಗಳೂರು,ಜೂ.5: ಅತಿಯಾದ ಪ್ಲಾಸ್ಟಿಕ್ ಬಳಸುವುದರಿಂದ ಉಂಟಾಗುತ್ತಿರುವ ತ್ಯಾಜ್ಯ ನಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸೇರಿ ಸಮಸ್ತ ಜೀವ ಸಂಕುಲಕ್ಕೆ ಹಾನಿ ಯುಂಟು ಮಾಡುತ್ತಿದೆ ಈ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದು ಗ್ರೀನ್ ಹೀರೋ ಓಫ್ ಇಂಡಿಯಾ ಆರ್.ಕೆ. ನಾಯರ್ ತಿಳಿಸಿದ್ದಾರೆ.ಬಲ್ಮಠ ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜುನಲ್ಲಿ ಅರಣ್ಯ ಇಲಾಖೆ, ಮಂಗಳೂರು, ಪರಿಸರ ಅಧ್ಯಯನ ಕೇಂದ್ರ ಹಾಗೂ ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೃಷಿ ಚಟುವಟಿಕೆ ಯಲ್ಲಿ ರಾಸಾಯನಿಕ ಬಳಕೆ ಮಾಡುವುದರಿಂದ ಪರಿಸರದ ಮೇಲೆ ಬಹಳಷ್ಟು ಹಾನಿ ಉಂಟಾಗುತ್ತಿದೆ. ರಾಸಾಯನಿಕ ಬಳಕೆ ಸಂಪೂರ್ಣ ನಿಲ್ಲಿಸಬೇಕಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಹಾಯಕ ವಲಯ ಅರಣ್ಯಧಿಕಾರಿ ಮೋಹನ್, ಉದ್ಯಮಿ ರಮೇಶ್ ನಾಯಕ್, ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನಿಯೋಜಿತ ಅಧ್ಯಕ್ಷ ಭಾಸ್ಕರ್ ರೈ, ಬಲ್ಮಠ ಸರಕಾರಿ ಪದವಿ ಪೂರ್ವ ಕಾಲೇಜುನ ವನಿತಾ ದೇವಾಡಿಗ, ರೆಡ್ ಕ್ರಾಸ್ ಸೊಸೈಟಿ ಸದಸ್ಯ ಪುಷ್ಪರಾಜ್ ಬಿ ಎನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆ

ಮಂಗಳೂರು: ನಾಟಕಗಳು ಅಥವಾ ರಂಗಭೂಮಿ ಹೊಸ ದೃಷ್ಟಿಕೋನದತ್ತ ತೆರೆದುಕೊಂಡಾಗ ಮಾತ್ರ ಅದು ಪ್ರೇಕ್ಷಕನನ್ನ ತಲುಪಲು ಸಾಧ್ಯ ಎಂದು ರಂಗಕರ್ಮಿ, ನಾಟಕ ರಚನೆಕಾರ,ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.ಅವರು ತ್ರಿನೇತ್ರ ಕಲಾವಿದರು ಮಂಗಳೂರು ಅಭಿನಯಿಸುವ ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.ನಾಟಕಕಾರ ಶಶಿ ರಾಜ್ ಕಾವೂರು, ಯಶವಂತ ಬೋಳೂರೂ, ಪರಮಾನಂದ ಸಾಲ್ಯಾನ್ ಸಸಿಹಿತ್ಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಷುದ್ರ ಶಕ್ತಿಯೊಂದರ ಕಥೆಯಾಧರಿಸಿಕೊಂಡಿರುವಂಹ ಬ್ರಹ್ಮ ರಕ್ಕಸೆ ಭಯಾನಕ ನಾಟಕ ವಿಭಿನ್ನವಾದಂತ ರಂಗ ಸಜ್ಜಿಕೆ, 3ಡಿ ಪರಿಕಲ್ಪನೆ ಯೊಂದಿಗೆ ರಂಗಭೂಮಿಗೆ ಬರಲಿದೆ. ತ್ರಿನೇತ್ರ ಕಲಾವಿದರು ಮಂಗಳೂರು ನಾಟಕವನ್ನು ಅಭಿನಯಿಸುತ್ತಿದ್ದು, ಕಥೆ ಸಾಹಿತ್ಯ ಸಂಭಾಷಣೆ ಪರಿಕಲ್ಪನೆ ನಿರ್ದೇಶನವನ್ನು ನರೇಶ್ ಕುಮಾರ್ ಮಾಡಿದ್ದು ಭಾಸ್ಕರ್ ಸಸಿಹಿತ್ಲು ಸಾರಥ್ಯದಲ್ಲಿ ಸಂಜೀತ್ ಚಿತ್ರಾಪುರ ಇವರ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮರಕ್ಕಸೆ ರಂಗಭೂಮಿಗೆ ಬರಲಿದ್ದು ಒಂದು ವಿಭಿನ್ನ ಪ್ರಯೋಗ ಎನಿಸಿಕೊಳ್ಳಲಿದೆ.

ಕರ್ನಾಟಕ ವಾರ್ತೆಗಳು

ಭೀಕರ ಕಾಲ್ತುಳಿತದಿಂದ ಮೃತ ಪಟ್ಟ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳಿಗೆ 11 ಲಕ್ಷ ರೂಪಾಯಿ ಪರಿಹಾರ ಘೋಷಣೆ. ಈ ದುರಂತ ಸಾವಿಗೆ ಯಾರೂ ಕಾರಣ?

ವಿಶೇಷ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಯನ್.ಬೆಂಗಳೂರು- ಆರ್ ಸಿ ಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಮೃತಪಟ್ಟ 11ಮಂದಿಗಳ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ. ಘಟನೆಗೆ ಕಾರಣ ಸರಕಾರವೇ,ಪೊಲೀಸ್ ಇಲಾಖೆಯೇ,ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಸಾರ್ವತ್ರಿಕ ಒತ್ತಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸುದ್ಧಿ ಗೋಷ್ಠಿ ನಡೆಸಿ ಇದರಲ್ಲಿ ರಾಜಕೀಯ ಬೇಡ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅರ್ಸಿಬಿ ಸಂಭ್ರಮ ಆಚರಣೆ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟ 11ಮಂದಿಗೆ ತಲಾ 10ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಗೊಂಡ 47ಮಂದಿಗಳ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚ ಭರಿಸಲಾಗುವುದೆಂದು ಸಿಎಂ ತಿಳಿಸಿದ್ದಾರೆ. ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈ ಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆಯಾಗಿರುವುದ್ದರಿಂದ ತನಿಖೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ನೀಡಲಾಗಿದೆ.ತನಿಖೆ ನಡೆಸಿ ಸಂಪೂರ್ಣ ವರದಿ ಒಪ್ಪಿಸಲು ಅವರಿಗೆ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆಂದು ಸಿಎಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲ್ತುಳಿತಕ್ಕೆ ಕಾರಣವೇನು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬಂದವರಿಗೆ ಮಾತ್ರ ಅವಕಾಶ ನೀಡಲಾಗುವುದೆಂದು KSCA ಹೇಳಿತ್ತು. ಜನ ಜೂನ್ 4ರ ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ನೆರೆದಿದ್ದರು.ಆದರೆ,ಗೇಟ್ ಓಪನ್ ಮಾಡಿದ್ದು 4ಗಂಟೆಗೆ.ಆಗ ಲಕ್ಷಕ್ಕೂ ಮಿಕ್ಕಿ ಆರ್ ಸಿ ಫ್ಯಾನ್ಸ್ ಗಳು ಒಮ್ಮೆಲೇ ರಭಸದಿಂದ ನುಗ್ಗಿದ್ದರು.ಆಗ ಬ್ಯಾರಿಕೇಡ್ ಗಳು ತುಂಡಾದವು.ಇನ್ನೊಂದು ಗೇಟ್ ನಲ್ಲಿಯೂ ಫ್ಯಾನ್ಸ್ ಗಳು ನುಗ್ಗಿದಾಗ ಮ್ಯಾನ್ ಹೋಲ್ ಸ್ಲಬ್ ಕಟ್ ಆಗಿ ಜನ ಕೆಳಗೆ ಬಿದ್ದರು. ಇದರಿಂದ ಉಸಿರಾಟದ ಸಮಸ್ಯೆ ಉಂಟಾಯಿತು. ಮಿತಿ ಮೀರಿದ ಜನರ ನಡುವೆ ನೂಕು ನುಗ್ಗಲು ಶುರುವಾಗಿ ಕೆಳಗೆ ಬಿದ್ದವರ ಎದೆ ಮೇಲೆ ಜನ ತುಳಿದು ಮುನ್ನುಗಿದರು. ಹೀಗೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತ ನಡೆಯಿತು. ಮೊದಲು ಟಿಕೆಟ್ ಬುಕ್ ಮಾಡಿದ್ದ 20ಸಾವಿರ ಮಂದಿಗೆ ಮಾತ್ರ ಪ್ರವೇಶಾವಕಾಶವೆಂದು KSCA ಹೇಳಿದ್ದು,,ಉಳಿದ ಲಕ್ಷಕ್ಕೂ ಮಿಕ್ಕಿ ಜನರ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ಈ ವೇಳೆ ಕ್ರೀಡಾಂಗಣದ ಗೇಟ್ ಮುರಿದ ಘಟನೆ ನಡೆದು ಕಾಲ್ತುಳಿತ ಸಂಭವಿಸಿ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳ ದುರಂತ ಸಾವು ಸಂಭವಿಸಿದೆ..ಅವಸರದಿಂದ ಸರಿಯಾದ ಪ್ಲಾನಿಂಗ್ ಮಾಡದೆ ವಿಜಯೋತ್ಸವ ಸಂಭ್ರಮವನ್ನು ಸಂಘಟಿಸಿದ್ದು ಅಮಾಯಕ 11ಜನರ ಸಾವಿಗೆ ಕಾರಣವಾಯಿತು.ಪೊಲೀಸ್ ವ್ಯವಸ್ಥೆ ವೈಫಲ್ಯ,ಸರಕಾರದ ನಿರ್ಲಕ್ಷ್ಯವೇ ಈ ದುರಂತ ಘಟನೆಗೆ ಕಾರಣವಾಗಿದೆಂದರೂ ತಪ್ಪಲ್ಲ .ಆರು ಮಂದಿ ಬೇರಿಂಗ್ ಆಸ್ಪತ್ರೆಯಲ್ಲಿ , ನಾಲ್ಕು ಮಂದಿ ವೈದೇಹಿ ಆಸ್ಪತ್ರೆಯಲ್ಲಿ,ಒಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.ಜೊತೆಗೆ , ಆರ್ ಸಿ ಬಿ ಕೂಡಾ ಸಂತಾಪ ಸೂಚಿಸಿದೆ.11 ಮಂದಿಗಳ ದುರಂತ ಸಾವಿಗೆ ರಾಜ್ಯ ಸರಕಾರವೇ ನೇರ ಹೊಣೆಯೆಂದು ಬಿಜೆಪಿ ಆರೋಪಿಸಿದೆ.

ಪ್ರಾದೇಶಿಕ ವಾರ್ತೆಗಳು

Strategic MoU Signed Between St. Aloysius (Deemed to be University), AIMIT Centre and IBM to Enhance IT and Management Education

A Memorandum of Understanding (MoU) was formally signed on 03 July 2025 between St. Aloysius (Deemed to be University), AIMIT Centre, and IBM. The signing ceremony was graced by Dr. Fr. Kiran Coth, Director of the AIMIT Centre; Mr. Jagdisha Bhat, Country Manager – Software Services, IBM; Mr. Madhusudhana, Regional Manager, IBM; Mr. Jithesh, Regional Manager, Techpath; and the Deans of AIMIT, Dr. Rajani Suresh and Dr. Hemalatha N.This MOU is1.Opportunity to emerge as one of the competent entities in the academic circles in various areas of Information technology.2.Opportunity to be recognized by the industry and academic circles as one of the preferredlocation/institutions for acquiring training and skills in the latest technology and software.3.Opportunity to students and faculty members to increase their knowledge and acquire skills on best-in-class IBM software.4.Opportunity to design innovative curriculum and various industry specializations using relevant IBM software.5.Opportunity to learn from the practitioners in the industry from IBM or business partners.6.Opportunity for students and faculty members to avail professional and global certification on IBM software. IBM and St. Aloysius Institute of Management & Information Technology (AIMIT) acknowledge the need for IBM software skills in the IT/MBA education and training sector. The objective is to have a number of graduating professionals skilled in IBM Software. Both IBM and St. Aloysius Institute of Management & Information Technology (AIMIT) are keen to cooperate in a way that shall benefit St. Aloysius Institute of Management & Information Technology (AIMIT) students pursuing a career in the industry.

ಪ್ರಾದೇಶಿಕ ವಾರ್ತೆಗಳು

AIMIT ಕೇಂದ್ರ ಮತ್ತು IBM ನಡುವಿನ ತಂತ್ರಜ್ಞಾನ ಮತ್ತು ನಿರ್ವಹಣಾ ಶಿಕ್ಷಣದ ಉನ್ನತಿಗಾಗಿ ಸಹಿ

2025ರ ಜುಲೈ 03ರಂದು ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), AIMIT ಕೇಂದ್ರ ಮತ್ತು IBM ನಡುವಿನ ಒಡಂಬಡಿಕೆಯನ್ನು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ AIMIT ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, IBM ನ ಸಾಫ್ಟ್‌ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, IBMನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್‌ಪಾಥ್‌ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ AIMITನ ಡೀನ್‌ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಉಪಸ್ಥಿತರಿದ್ದರು. ಈ ಒಡಂಬಡಿಕೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳಾಗಿ ಗುರುತಿಸಿಕೊಳ್ಳುವ ಮಹತ್ವದ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ಗಳ ಶಿಕ್ಷಣ ಹಾಗೂ ತರಬೇತಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ವಲಯಗಳಲ್ಲಿ ಆದ್ಯತೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುವ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು IBMನ ಶ್ರೇಷ್ಠ ಸಾಫ್ಟ್‌ವೇರ್‌ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. IBM ಸಾಫ್ಟ್‌ವೇರ್‌ಗಳನ್ನು ಆಧಾರವಾಗಿಟ್ಟುಕೊಂಡು ನವೀನ ಪಠ್ಯಕ್ರಮಗಳನ್ನೂ ಉದ್ಯಮ ಸಂಬಂಧಿತ ವಿಭಿನ್ನ ತಂತ್ರಜ್ಞಾನಗಳನ್ನೂ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ IBM ಅಥವಾ ಅದರ ವ್ಯವಹಾರ ಪಾಲುದಾರ ಸಂಸ್ಥೆಗಳ ಉದ್ಯಮ ತಜ್ಞರಿಂದ ನೈಜ ಅನುಭವದಿಂದ ಕಲಿಯುವ ಅವಕಾಶವೂ ಲಭ್ಯವಾಗುತ್ತದೆ. ಅಂತೆಯೇ, ವಿದ್ಯಾರ್ಥಿಗಳು ಹಾಗೂ ಬೋಧಕರು IBM ಸಾಫ್ಟ್‌ವೇರ್ ಆಧಾರಿತ ವೃತ್ತಿಪರ ಮತ್ತು ಜಾಗತಿಕ ಪ್ರಮಾಣಪತ್ರಗಳನ್ನು ಪಡೆದು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಈ ಒಡಂಬಡಿಕೆ ನೆರವಾಗಲಿದೆ. IBM ಹಾಗೂ ಸೈಂಟ್ ಅಲೋಶಿಯಸ್ ನಿರ್ವಹಣಾ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (AIMIT) IT/ಎಂಬಿಎ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ IBM ಸಾಫ್ಟ್‌ವೇರ್ ಕೌಶಲ್ಯದ ಅಗತ್ಯವನ್ನು ಅರಿತಿವೆ. ಈ ಸಹಯೋಗದ ಉದ್ದೇಶ, IBM ಸಾಫ್ಟ್‌ವೇರ್‌ನಲ್ಲಿ ತಜ್ಞರಾಗಿರುವ ಪದವೀಧರರನ್ನು ಹೆಚ್ಚಿಸುವುದು. IBM ಮತ್ತು AIMIT ಎರಡು ಸಂಸ್ಥೆಗಳು ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದ ಕ್ಷೇತ್ರದಲ್ಲಿ ಯಶಸ್ವಿ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶಿಸಲಾಗಿದೆ.

ಆರೋಗ್ಯವಾಣಿ

ಮೈಗ್ರೇನ್. ಹಾರ್ಮೋನ್‌ಗಳು ಮಹಿಳೆಯರ ನರಶಾಸ್ತ್ರೀಯ ಆರೋಗ್ಯವನ್ನು ಹೇಗೆ ಪ್ರಭಾವಿಸುತ್ತವೆ?

ಮೈಗ್ರೇನ್: ಒಂದು ಸಂಕೀರ್ಣ ನರಶಾಸ್ತ್ರೀಯ ಸಮಸ್ಯೆಪದೇ ಪದೇ ಪುನರಾವರ್ತನೆಯಾಗುವ, ತೀವ್ರವಾದ ತಲೆನೋವು; ಇದರ ಜತೆಗೆ ವಾಕರಿಕೆ, ವಾಂತಿ ಹಾಗೂ ಸದ್ದು, ಬೆಳಕು ಮತ್ತು ವಾಸನೆಗೆ ಸೂಕ್ಷ್ಮ ಸಂವೇದಿತ್ವಗಳಂತಹ ಲಕ್ಷಣ ಹೊಂದಿರುವ ನರಶಾಸ್ತ್ರೀಯ ಅನಾರೋಗ್ಯವೇ ಮೈಗ್ರೇನ್. ಜಾಗತಿಕವಾಗಿ ಇದು ಒಂದು ಶತಕೋಟಿಗೂ ಅಧಿಕ ಮಂದಿಯನ್ನು ಬಾಧಿಸುತ್ತಿರುವ ಈ ಮೈಗ್ರೇನ್‌ಗಳು ಸಾಮಾನ್ಯ ತಲೆನೋವಿಗಿಂತ ವಿಶಿಷ್ಟವಾದ ಅನಾರೋಗ್ಯವಾಗಿವೆ. ವಂಶವಾಹಿ, ಪರಿಸರಕ್ಕೆ ಸಂಬಂಧಿಸಿದ ಮತ್ತು ನರಶಾಸ್ತ್ರೀಯ ಅಂಶಗಳು ಇದು ಉಂಟಾಗುವಲ್ಲಿ ಪಾತ್ರ ವಹಿಸುತ್ತವೆ.ಮೈಗ್ರೇನ್‌ನ ವಿಶಿಷ್ಟ ಮತ್ತು ಪ್ರಧಾನ ಲಕ್ಷಣಗಳು ಎಂದರೆ 4ರಿಂದ 72 ತಾಸುಗಳ ವರೆಗೆ ಇರಬಹುದಾದ, ಜುಮುಗುಡುವ ತಲೆಯ ಎಲ್ಲ ಭಾಗಗಳಲ್ಲಿಯ ನೋವು ಮತ್ತು ಇದಕ್ಕೆ ಪೂರ್ವಭಾವಿಯಾಗಿ ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು ಅಥವಾ ಚುಚ್ಚಿದಂತಹ ಅನುಭವಗಳು. ಮೈಗ್ರೇನ್‌ಗೆ ನಿಖರವಾದ ಕಾರಣವನ್ನು ಗುರುತಿಸುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಇವು ನರ ಸಂಕೇತಗಳು, ರಕ್ತನಾಳಗಳು ಹಾಗೂ ಸೆರೆಟೋನಿನ್ ಮತ್ತು ಡೋಪಮೈನ್‌ನಂತಹ ಮೆದುಳಿನ ರಾಸಾಯನಿಕಗಳ ಮೇಲೆ ಪ್ರಭಾವ ಬೀರುವ ಮೆದುಳಿನ ಅಸಹಜ ಚಟುವಟಿಕೆಗಳ ಫಲಿತಾಂಶವಾಗಿ ಮೈಗ್ರೇನ್ ಉಂಟಾಗುತ್ತದೆ ಎಂದು ಹೇಳಲಾಗಿದೆ. ಮಹಿಳೆಯರ ನರಶಾಸ್ತ್ರೀಯ ಆರೋಗ್ಯದ ಮೇಲೆ ಹಾರ್ಮೋನ್‌ಗಳು ಹೇಗೆ ಪ್ರಭಾವ ಬೀರುತ್ತವೆ?ಮಹಿಳೆಯರು ಮೈಗ್ರೇನ್‌ಗೆ ತುತ್ತಾಗುವುದು ಅತ್ಯಂತ ಹೆಚ್ಚು ಪುರುಷರಿಗಿಂತ ಮೂರುಪಟ್ಟು ಹೆಚ್ಚು ಪ್ರಮಾಣದಲ್ಲಿ ಅದರಲ್ಲೂ ತಮ್ಮ ಸಂತಾನೋತ್ಪತ್ತಿ ವರ್ಷಗಳಲ್ಲಿ ಮಹಿಳೆಯರು ಮೈಗ್ರೇನ್‌ಗೆ ತುತ್ತಾಗುತ್ತಾರೆ. ಈ ಅಗಾಧ ಅಂತರವು ವಿಶೇಷವಾಗಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟಿರೋನ್ ಸಹಿತ ಹಾರ್ಮೋನ್ ಏರಿಳಿತದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.ನರಶಾಸ್ತ್ರೀಯ ಆರೋಗ್ಯದ ಮೇಲೆ ಈಸ್ಟ್ರೋಜಿನ್ ಪರಿಣಾಮಸ್ತ್ರೀ ಹಾರ್ಮೋನ್‌ಗಳಲ್ಲಿ ಪ್ರಧಾನವಾಗಿರುವ ಈಸ್ಟ್ರೋಜೆನ್ ಮೆದುಳಿನ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ನೋವು ಮತ್ತು ಭಾವನಾತ್ಮಕ ಮನೋಸ್ಥಿತಿಯನ್ನು ನಿಯಂತ್ರಿಸುವ ಸೆರೆಟೋನಿನ್ ಮತ್ತು ಡೋಪಮೈನ್‌ನಂತಹ ನ್ಯುರೋಟ್ರಾನ್ಸ್ಮಿಟರ್‌ಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಋತುಸ್ರಾವ, ಗರ್ಭಿಣಿಯಾಗಿರುವ ಸಮಯ ಅಥವಾ ಋತುಚಕ್ರ ಬಂಧದಂತಹ ಹಾರ್ಮೋನ್ ಏರಿಳಿತದ ಅವಧಿಗಳಲ್ಲಿ ಈಸ್ಟ್ರೋಜೆನ್ ಮಟ್ಟಗಳಲ್ಲಿ ಆಗುವ ಬದಲಾವಣೆಗಳು ಮೈಗ್ರೇನ್‌ನ್ನು ಪ್ರಚೋದಿಸಬಹುದು ಅಥವಾ ಈಗಾಗಲೇ ಇರುವ ಮೈಗ್ರೇನ್‌ನ್ನು ಹೆಚ್ಚಿಸಬಹುದು. ಋತುಸ್ರಾವ ಅವಧಿಯ ಮೈಗ್ರೇನ್:ಅನೇಕ ಮಹಿಳೆಯರು ತಮ್ಮ ಋತುಸ್ರಾವದ ಅವಧಿಯಲ್ಲಿಯೇ ಮೈಗ್ರೇನ್ ಅನುಭವಿಸುತ್ತಾರೆ. ಇದನ್ನು ಋತುಸ್ರಾವ ಅವಧಿಯ ಮೈಗ್ರೇನ್ ಎನ್ನಲಾಗುತ್ತದೆ. ಋತುಸ್ರಾವಕ್ಕೆ ಮುನ್ನ ಉಂಟಾಗುವ ಈಸ್ಟ್ರೋಜೆನ್ ಕುಸಿತದಿಂದಾಗಿ ಇದು ಉಂಟಾಗುತ್ತದೆ. ಈ ಈಸ್ಟ್ರೋಜೆನ್ ಕುಸಿದಿಂದಾಗಿ ಮೆದುಳಿನ ಸಂವೇದಕಗಳಲ್ಲಿ ಅಸ್ಥಿರತೆ ಉಂಟಾಗುತ್ತದೆ ಹಾಗೂ ನೋವಿನ ಪ್ರಚೋದಕಗಳಿಗೆ ಸೂಕ್ಷ್ಮ ಸಂವೇದಿತನವನ್ನು ಹೆಚ್ಚುತ್ತದೆ.ಗರ್ಭಧಾರಣೆ ಮತ್ತು ಮೈಗ್ರೇನ್ಗರ್ಭಧಾರಣೆಯ ಅವಧಿಯಲ್ಲಿ ಈಸ್ಟ್ರೋಜೆನ್ ನಿಧಾನವಾಗಿ ಹೆಚ್ಚಳವಾಗುವುದರಿಂದ ಗರ್ಭಧಾರಣೆಯು ಮೈಗ್ರೇನ್‌ನಿಂದ ಮುಕ್ತಿ ನೀಡುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಈ ಹಾರ್ಮೋನ್ ಹೆಚ್ಚಳವು ಮೈಗ್ರೇನ್ ಲಕ್ಷಣಗಳು ಹೆಚ್ಚುವುದಕ್ಕೆ ಕಾರಣವಾಗಬಹುದಾಗಿದೆ; ಈ ಸಾಧ್ಯತೆ ಮೊದಲ ತ್ರೈಮಾಸಿಕದಲ್ಲಿ ಅಧಿಕವಾಗಿರುತ್ತದೆ.ಹಾರ್ಮೋನಲ್ ಕಾಂಟ್ರಾಸೆಪ್ಟಿವ್‌ಗಳು ಮತ್ತು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (ಎಚ್‌ಆರ್‌ ಟಿ)ಬಾಯಿಯ ಮೂಲಕ ತೆಗೆದುಕೊಳ್ಳುವ ಸಂತಾನನಿರೋಧಕಗಳು ಕೆಲವು ಮಹಿಳೆಯರಲ್ಲಿ ಮೈಗ್ರೇನ್ ಉಲ್ಬಣಗೊಳ್ಳುವುದಕ್ಕೆ ಕಾರಣವಾದರೆ, ಇನ್ನು ಕೆಲವರಿಗೆ ಹಾರ್ಮೋನ್ ಮಟ್ಟವನ್ನು ಸ್ಥಿರೀಕರಿಸುವ ಮೂಲಕ ಮುಕ್ತಿ ನೀಡಬಹುದಾಗಿದೆ. ಹಾಗೆಯೇ ಋತುಚಕ್ರ ಬಂಧದ ಸಮಯದಲ್ಲಿ ನೀಡಬಹುದಾದ ಎಚ್‌ಆರ್‌ಟಿಯಿಂದ ಮೈಗ್ರೇನ್ ಉಲ್ಬಣಗೊಳ್ಳಲೂ ಬಹುದು; ಕಡಿಮೆಯಾಗಲೂ ಬಹುದು. ಇದು ಎಚ್‌ಆರ್‌ಟಿಯ ಸಂಯೋಜನೆ ಮತ್ತು ಡೋಸೇಜ್ ಮೇಲೆ ಅವಲಂಭಿತವಾಗಿರುತ್ತದೆ.ಋತುಚಕ್ರ ಬಂಧದ ಅನಂತರ ಅವಧಿ ಮತ್ತು ಮೈಗ್ರೇನ್‌ನಿಂದ ಮುಕ್ತಿಋತುಚಕ್ರ ಬಂಧದ ಅನಂತರ ಹಾರ್ಮೋನ್ ಮಟ್ಟ ಸ್ಥಿರಗೊಳ್ಳುವುದರಿಂದ ಅನೇಕ ಮಹಿಳೆಯರಿಗೆ ಮೈಗ್ರೇನ್ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತದೆಯಲ್ಲದೆ ತೀವ್ರತೆಯೂ ಕಡಿಮೆಯಾಗುತ್ತದೆ. ಆದರೂ ಕೆಲವು ಮಹಿಳೆಯರು ಇತರ ಮೈಗ್ರೇನ್ ಪ್ರಚೋದಕಗಳಾದ ಒತ್ತಡ, ಕಡಿಮೆ ನಿದ್ದೆ ಮತ್ತು ಆಹಾರ ಕ್ರಮಕ್ಕೆ ಸಂಬಂಧಿಸಿದ ಅಂಶಗಳಿಗೆ ಸೂಕ್ಷ್ಮ ಸಂವೇದಿಗಳಾಗಿರುತ್ತಾರೆ. ನರಶಾಸ್ತ್ರೀಯ ಆರೋಗ್ಯದ ಮೇಲೆ ಹಾರ್ಮೋನ್‌ಗಳ ವಿಸ್ತ್ರೃತ ಪರಿಣಾಮಗಳುಮೈಗ್ರೇನ್ ಅಲ್ಲದೆ ಹಾರ್ಮೋನ್ ಏರಿಳಿತಗಳು ಮಹಿಳೆಯರ ಒಟ್ಟು ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದಾಗಿದೆ. ಮನೋಭಾವಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆಲ್ಜೀಮರ್ಸ್ ಡಿಸೀಸ್ ಮತ್ತು ಮಲ್ಟಿಪಲ್ ಸ್ಕೆ್ಲರೋಸಿಸ್ (ಎಂಎಸ್)ಗಳು ಕೂಡಾ ಹಾರ್ಮೋನ್ ಏರಿಳಿತಗಳಿಂದಾಗಿ ಲಿಂಗತ್ವ ನಿರ್ದಿಷ್ಟ ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ. ಈಸ್ಟ್ರೋಜೆನ್ ಮೆದುಳಿನ ಜೀವಕೋಶಗಳನ್ನು ಪ್ರವರ್ಧಿಸುತ್ತದೆ ಮತ್ತು ದುರಸ್ತಿಪಡಿಸುವ ಮೂಲಕ ನರಶಾಸ್ತ್ರೀಯವಾಗಿ ರಕ್ಷಕ ಪಾತ್ರ ನಿರ್ವಹಿಸುತ್ತದೆ, ವಯಸ್ಸಾದಂತೆ ಇದರಲ್ಲಿ ಕುಸಿತವು ನರಶಾಸ್ತ್ರೀಯ ಕ್ಷಯಕಾರಕ (ನ್ಯುರೋಡಿಜನರೇಟಿವ್) ಕಾಯಿಲೆಗಳು ತಲೆದೋರುವ ಅಪಾಯವನ್ನು ಹೆಚ್ಚಿಸುತ್ತದೆ.ಸಾರಾಂಶವಿವಿಧ ಹಾರ್ಮೋನ್‌ಗಳ ಮಟ್ಟ ಮತ್ತು ನರಶಾಸ್ತ್ರೀಯ ಆರೋಗ್ಯದ ಮೇಲೆ ಅದರ ಸಂಕೀರ್ಣ ಸಂಬಂಧವು ಈ ಬಗ್ಗೆ ಲಿಂಗ-ನಿರ್ದಿಷ್ಟ ಅಧ್ಯಯನ ಮತ್ತು ಚಿಕಿತ್ಸೆಯ ವಿಧಾನದ ಅಗತ್ಯವನ್ನು ಒತ್ತಿಹೇಳುತ್ತದೆ. ಮೈಗ್ರೇನ್ ಮತ್ತು ಇತರ ನರಶಾಸ್ತ್ರೀಯ ಅನಾರೋಗ್ಯಗಳಿಗೂ ಹಾರ್ಮೋನ್ ಮಟ್ಟಗಳಿಗೂ ಇರುವ ಅಂತರ್‌ಸಂಬಂಧದ ಕುರಿತಾದ ತಿಳಿವಳಿಕೆಯು ತಮ್ಮ ಆರೋಗ್ಯವನ್ನು ನಿಭಾಯಿಸುವ ವ್ಯಕ್ತಿಗತ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರನ್ನು ಸಶಕ್ತಗೊಳಿಸಬಹುದಾಗಿದೆ.

Scroll to Top