Author name: editor

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಬ್ಯಾಂಕಿನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ. ದುರ್ಬಲರ ಸೇವೆಗೆ ಉದಾರ ಬೆಂಬಲದೊಂದಿಗೆ ಕೈಜೋಡಿಸಿದ ಬ್ಯಾಂಕ್.

ಕರ್ನಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದಡಿ, ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಉದಾರವಾದ ಕೊಡುಗೆ ನೀಡಿ, ಮಾನವ ಘನತೆ, ಚೇತರಿಕೆ ಮತ್ತು ದುರ್ಬಲರಿಗೆ ಕಾಳಜಿಯ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ತೊರೆಯಲ್ಪಟ್ಟವರಿಗೆ ಮತ್ತು ಮಾನಸಿಕವಾಗಿ ಅಸ್ವಸ್ಥರಿಗೆ ಆಶ್ರಯವಾಗಿರುವ ಸ್ನೇಹಾಲಯಕ್ಕೆ, ಕರ್ನಾಟಕ ಬ್ಯಾಂಕ್ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್ಗಳನ್ನು ದಾನವಾಗಿ ನೀಡಿತು. ₹10.57 ಲಕ್ಷ ಮೌಲ್ಯದ ಈ ಅಮೂಲ್ಯ ಕೊಡುಗೆ, ನಿವಾಸಿಗಳಿಗೆ ಸೌಕರ್ಯ, ಆರಾಮ ಮತ್ತು ಮಾನವ ಘನತೆಯ ಭಾವನೆಯನ್ನು ಒದಗಿಸಿ, ಅವರ ಚೇತರಿಕೆ ಮತ್ತು ಪರಿವರ್ತನೆಯ ಪಯಣವನ್ನು ಮತ್ತಷ್ಟು ಸಮೃದ್ಧಗೊಳಿಸಿತು.ಈ ಭಾವನಾತ್ಮಕ ಕಾರ್ಯಕ್ರಮವು ಜೂನ್ 12, 2025ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಶ್ರೀ ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶ್ರೀ ಶಾಮ್ ಕುಮಾರ್ ಉಪಸ್ಥಿತರಿದ್ದರು. ಸ್ನೇಹಾಲಯದ ಚಾಪ್ಲಿನ್ ವ. ಫಾದರ್ ಸಿರಿಲ್ ಡಿಸೋಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭಿಕರನ್ನು ಮತ್ತು ಅತಿಥಿಗಳನ್ನು ಆಶೀರ್ವದಿಸಿದರು. ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ಟಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕೇಂದ್ರದ ಸ್ಫೂರ್ತಿದಾಯಕ ಪಯಣವನ್ನು ಹಂಚಿಕೊಂಡರು. “ಇವು ಕೇವಲ ಹಾಸಿಗೆಗಳು ಅಥವಾ ಕಂಬಳಿಗಳಲ್ಲ; ಇವು ನಿಮ್ಮ ಕಾಳಜಿ, ಭರವಸೆ ಮತ್ತು ಚೇತರಿಕೆಯ ಕಾರ್ಯದಲ್ಲಿ ನಂಬಿಕೆಯ ಸಂಕೇತಗಳು. ಇವು ನಮ್ಮ ನಿವಾಸಿಗಳಿಗೆ ‘ಸಮಾಜ ನಿಮ್ಮನ್ನು ಮರೆತಿಲ್ಲ, ನೀವು ಪ್ರೀತಿಪಾತ್ರರು’ ಎಂಬ ಸಂದೇಶವನ್ನು ನೀಡುತ್ತವೆ,” ಎಂದು ಅವರು ಕೃತಜ್ಞತೆಯಿಂದ ಹೇಳಿದರು. 2021-22ರಲ್ಲಿ ಕರ್ನಾಟಕ ಬ್ಯಾಂಕ್ ಸ್ನೇಹಾಲಯಕ್ಕೆ ಎಲೆಕ್ಟ್ರಿಕ್ ಆಟೋ ದಾನ ಮಾಡಿದ್ದನ್ನು ಅವರು ಪ್ರೀತಿಯಿಂದ ನೆನಪಿಸಿಕೊಂಡರು.ಸ್ನೇಹಾಲಯದ ಸ್ನೇಹಮಯ ವಾತಾವರಣದಿಂದ ಪ್ರಭಾವಿತರಾದ ಶ್ರೀ ವಿಶ್ವನಾಥ್, “ಕರ್ನಾಟಕ ಬ್ಯಾಂಕಿನ ಸಿಎಸ್ಆರ್ ಬೆಂಬಲವು ನೊಂದ ಜೀವಿಗಳಿಗೆ ತಲುಪಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಸ್ನೇಹಾಲಯ ನಿಸ್ವಾರ್ಥವಾಗಿ ಅದ್ಭುತ ಕೆಲಸವನ್ನು ಮಾಡುತ್ತಿದೆ. ಈ ಪಯಣದ ಭಾಗವಾಗಿರುವುದು ನನಗೆ ಗೌರವದ ಸಂಗತಿ. ಭವಿಷ್ಯದಲ್ಲೂ ನಮ್ಮ ನಿರಂತರ ಬೆಂಬಲವಿರುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸ್ನೇಹಾಲಯದ ಉಪ ಕಾರ್ಯನಿರ್ವಾಹಕರಾದ ಶ್ರೀಮತಿ ವೀಣಾ, ಬ್ಯಾಂಕ್ ಮತ್ತು ಅದರ ಪ್ರತಿನಿಧಿಗಳಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು. “ಇಂತಹ ದಯೆಯ ಕಾರ್ಯಗಳು ವ್ಯಕ್ತಿಗಳನ್ನು ಮಾತ್ರವಲ್ಲ, ಇಡೀ ಸಮುದಾಯವನ್ನು ಉನ್ನತೀಕರಿಸುತ್ತವೆ,” ಎಂದು ಒತ್ತಿಹೇಳಿದರು.ಈ ಕಾರ್ಯಕ್ರಮವು ಒಗ್ಗಟ್ಟು, ಪ್ರೀತಿ ಮತ್ತು ಮಾನವೀಯತೆಯ ಸುಂದರ ಪ್ರತಿಬಿಂಬವಾಗಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಯು ಭಾಗವಹಿಸಿದ ಈ ಸಭೆಯಲ್ಲಿ, ಸ್ನೇಹಾಲಯ ಸಂಸ್ಥೆಯ ಮಿಷನ್ನಲ್ಲಿ ನಂಬಿಕೆಯಿಟ್ಟು, ಸಮಾಜಮುಖೀ ಕಾರ್ಯದಲ್ಲಿ ಕೈಜೋಡಿಸಿದ ಕರ್ನಾಟಕ ಬ್ಯಾಂಕಿಗೆ ಚಿರಋಣಿಯಾಗಿದೆ.

ಪ್ರಾದೇಶಿಕ ವಾರ್ತೆಗಳು

ಅಹ್ಮದಾಬಾದ್ ವಿಮಾನ ದುರಂತಕ್ಕೆ ಮಂಗಳೂರು ಬಿಷಪ್ ದಿಗ್ಭ್ರಮೆ, ಸಂತಾಪ

ಮಂಗಳೂರು: ಗುಜರಾತಿನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿದ ಬಗ್ಗೆ ಆಘಾತ ವ್ಯಕ್ತ ಪಡಿಸಿರುವ ಅವರು ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟವರ ಆತ್ಮಗಳಿಗೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಬಿಡುಗಡೆ

ಮಂಗಳೂರು: ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ಅವರು ಬರೆದ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕವನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ ದ.ಕ.ಜಿಲ್ಲೆ ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಬಾಸೆ ಹೀಗೆ ವೈವಿಧ್ಯಮಯ ಭಾಷಿಗರ ಪ್ರದೇಶವಾಗಿದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಬ್ಯಾರಿ ಭಾಷೆಯ ಶಬ್ಧಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಅವರು ಮಾತನಾಡಿ ‘ ಭಾಷೆಯಲ್ಲಿ ಮೇಲು , ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈ ಪಿಡಿಯಾಗಿದೆ ಎಂದರು.ಬ್ಯಾರಿ ಕಲಾರಂಗ ಅಧ್ಯಕ್ಷ, ಲೇಖಕ ಅಜೀಜ್ ಬೈಕಂಪಾಡಿ ಅವರು ಮಾತನಾಡಿ, ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ವಿವಿಧ ಇಲಾಖೆ, ವಿದ್ಯಾಸಂಸ್ಥೆ ಹಾಗೂ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆಪುಸ್ತಕದ ಪ್ರಥಮ ಪ್ರತಿ ನೀಡಲಾಯಿತು. ಬ್ಯಾರಿ ಕಲಾರಂಗದ ಸದಸ್ಯರಾದ ಇಸ್ಮಾಯಿಲ್ ಮೂಡುಶೆಡ್ಡೆ, ಶಾಹುಲ್ ಹಮೀದ್,ಸತೀಶ್ ಸುರತ್ಕಲ್, ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ತುಳುವೆರೆನ ತುಳುನಾಡ ಸಂತೆ” ಮಾವು ಹಲಸುಗಳೊಂದಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಇದೇ ಬರುವ ತಾರೀಕು ಜೂ. 20,21,22 ರಂದು ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುವ “ತುಳುವೆರೆನ ತುಳುನಾಡ ಸಂತೆ” ಮಾವು ಹಲಸುಗಳೊಂದಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಪೂಜೆ ನೆರವೇರಿಸಿ ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್ಕೆ ನಯನಾಡು, ಕೋಶಾದಿಕಾರಿ ಸುಭಾಶ್ಚಂದ್ರ ಜೈನ್,ಉಪಾಧ್ಯಕ್ಷರು ಕೆ.ಸೀತಾರಾಮ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಸಮಿತಿ ಸಂಚಸಲಕರಾದ ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ ಸಿ.ಪೆರ್ನೆ, ಪರಮೇಶ್ವರ ಮೂಲ್ಯ, ಮೋಹನ್ ಶೆಟ್ಟಿ ಪಂಜಿಕಲ್ಲು, ಚಂದ್ರಶೇಖರ್ ಗಟ್ಟಿ, ಸತೀಶ್ ಕುಮಾರ್ ಕಾರ್ತಿಕ್, ಸನ್ಮತಿ ಜೆ.ಜೈನ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಿಮಾನ ನಿಲ್ದಾಣದಲ್ಲೇ ಕಡತಗಳಿಗೆ ಸಹಿ ಹಾಕುವ ಮೂಲಕ ಸೇವೆಗೆ ಸಿದ್ದರಾದ ಹಾಜಿ ಸ್ಪೀಕರ್ ಯು.ಟಿ ಖಾದರ್ ಫರೀದ್

ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಅವರನ್ನು ಬರಮಾಡಿಕೊಡಲು ಕುಟುಂಬಸ್ಥರು ಸ್ನೇಹಿಗಳು ಕಾಯುತ್ತಿದ್ದರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಕಿ ಇರುವ ಕಡತಗಳಿಗೆ ಸಹಿ ಹಾಕುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ.ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳನ್ನು ಕರೆಸಿ ಇಷ್ಟು ದಿನ ಬಾಕಿ ಉಳಿದ ಹಲವು ಕಡತಗಳನ್ನು ಪರಿಶೀಲಿಸಿ ಸಹಿ ಹಾಕಿ ಕಳಿಸಿದ್ದಾರೆ.ಹಜ್ಜ್ ಯಾತ್ರೆ ಮುಗಿಸಿ ಬರುವಾಗ ಸಹಜವಾದ ಅರೋಗ್ಯ ಏರು ಪೇರನ್ನು ಲೆಕ್ಕಿಸದೆ ಸೇವೆಗೆ ಇಳಿದಿರುವುದು ಅವರ ಕೆಲಸದ ಮೇಲಿರುವ ಗೌರವ ಎತ್ತಿ ತೋರಿಸಿವೆ.ಇದೀಗ ಬೆಂಗಳೂರಿನಲ್ಲೇ ಕೆಲವೊಂದು ಸಭೆಯ ಬಳಿಕ ಮಂಗಳೂರು ತಲುಪಲಿರುವ ಹಾಜಿ ಯು.ಟಿ ಖಾದರ್ ಫರೀದ್ ನಾಳೆ ದಿನ ಪೂರ್ತಿ ಸೇವೆಯಲ್ಲಿ ನಿರತರಾಗಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಫೌಂಡೇಶನ್ ಬಂಟ್ವಾಳ ಘಟಕದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿ ಗುತ್ತು ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕ ಇದರ ಪದಾಧಿಕಾರಿಗಳ ಸಭೆಯು ಅಧ್ಯಕ್ಷರಾದ ಚಂದ್ರಹಾಸ. ಡಿ. ಶೆಟ್ಟಿ ರಂಗೋಲಿ ಇವರ ಅಧ್ಯಕ್ಷತೆ ಯಲ್ಲಿ ಬಿ.ಸಿ. ರೋಡಿನ ಹೋಟೆಲ್ ರಂಗೋಲಿಯಲ್ಲಿ ಜರಗಿತು.ಜಗನ್ನಾಥ ಚೌಟ ಬದಿಗುಡ್ಡೆ, ಸದಾನಂದ ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್, ಸಂಜೀವ ಶೆಟ್ಟಿ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಜಕ್ರಿಬೆಟ್ಟು, ದೇವದಾಸ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ಶಂಕರ ಶೆಟ್ಟಿ ಪರಾರಿಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ಸತೀಶ್ ಶೆಟ್ಟಿ ಮೊಡಂಕಾಪು ಸಭೆಯಲ್ಲಿ ಉಪಸ್ಥಿತರಿದ್ದರು.ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು.ಗೌರವಾಧ್ಯಕ್ಷರು : ಜಗನ್ನಾಥ ಚೌಟ ಬದಿಗುಡ್ಡೆಅಧ್ಯಕ್ಷರು : ದಿವಾಕರ ಶೆಟ್ಟಿ ಪರಾರಿ ಗುತ್ತುಸಂಚಾಲಕರು : ಭುವನೇಶ್ ಪಚ್ಚಿನಡ್ಕಪ್ರಧಾನ ಕಾರ್ಯದರ್ಶಿ : ಬಿ. ದೇವದಾಸ ಶೆಟ್ಟಿಜತೆ ಕಾರ್ಯದರ್ಶಿ : ಮೋಹನ ದಾಸ್ ಕೊಟ್ಟಾರಿಉಪಾಧ್ಯಕ್ಷರು : ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಜಕ್ರಿಬೆಟ್ಟು, ಸತೀಶ್ ಶೆಟ್ಟಿ ಮೊಡಂಕಾಪು, ಕೋಶಾಧಿಕಾರಿ : ಶಂಕರ ಶೆಟ್ಟಿ ಪರಾರಿ,ಗೌರವ ಸಲಹೆಗಾರರು : ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿ. ರಮಾನಾಥ ರೈ, ಚಂದ್ರಹಾಸ್. ಡಿ. ಶೆಟ್ಟಿ ರಂಗೋಲಿ, ಸತೀಶ್ ಶೆಟ್ಟಿ ಪಟ್ಲ, ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಸದಾನಂದ. ಡಿ. ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್.

ಪ್ರಾದೇಶಿಕ ವಾರ್ತೆಗಳು

ಆಂಜೆಲೋರ್‌ ಚರ್ಚಿನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ

ಮಂಗಳೂರು: ಮಂಗಳೂರು ನಗರದ ನಾಗುರಿಯ ಗಾರ್ಡಿಯನ್ ಏಂಜೆಲ್ ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕ ಮತ್ತು ಆರೋಗ್ಯ ಆಯೋಗದ ಆಶ್ರಯದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಚರ್ಚ್ ಸಭಾಂಗಣದಲ್ಲಿ ನಡೆಯಿತು.ಮನೆಯಲ್ಲಿ ಸಂಭವಿಸುವ ವಿದ್ಯುತ್ ಅಪಘಾತ, ನೀರಿಗೆ ಬಿದ್ದು ದುರಂತ, ವಿಷದ ಹಾವು ಕಡಿತ, ಆಹಾರ ಸೇವಿಸುವಾಗ ಗಂಟಲಿನಲ್ಲಿ ಸಿಲುಕಿ ಕೊಳ್ಳುವುದು, ಕುಸಿದು ಬೀಳುವ ಸಂದರ್ಭ ಮುಂತಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಯಿತು.ಆಂಜೆಲೋರ್‌ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಫ್ರೆಡ್ರಿಕ್ ಮೊಂತೆರೊ, ವಾಸ್ತವ್ಯ ಧರ್ಮಗುರು ವಂದನೀಯ ಫಾ. ಸ್ಟೇನಿ ಫೆರ್ನಾಂಡಿಸ್, ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊನಿನಾ ಡಿ’ ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ರಿತೇಶ್ ಡಿ’ ಕುನ್ಹಾ, ಚರ್ಚಿನ ಮಾಜಿ ಉಪಾಧ್ಯಕ್ಷ ಆಲ್ಬರ್ಟ್ ಲಸ್ರಾದೊ, ಫಿಲೋಮಿನಾ ತಾವ್ರೋ ಮುಂತಾದವರು ಉಪಸ್ಥಿತರಿದ್ದರು

ರಾಷ್ಟ್ರೀಯ ವಾರ್ತೆಗಳು

ಪಿನ್ ಕೋಡ್‌ಗೆ ವಿದಾಯ !!!

ದೆಹಲಿ: ಅಂಚೆ ವಿಳಾಸಗಳ ಮೋಡಿಯಾಗಿದ್ದ ಪಿನ್ ಕೋಡ್‌ಗಳ ಯುಗ ಮುಗಿದಿದ್ದು, ಬದಲಾಗಿ ನಿಮಗೆ ಭಾರತೀಯ ಅಂಚೆ ಇಲಾಖೆಯು ಪರ್ಯಾಯವಾಗಿ ‘ಡಿಜಿಪಿನ್’ ಎಂಬ ಡಿಜಿಟಲ್ ವಿಳಾಸವನ್ನು ಪರಿಚಯಿಸಿದೆ. ಇಂದಿನಿಂದ ದೇಶದಲ್ಲಿ ಡಿಜಿಪಿನ್ ಹೊಸ ವಿಳಾಸ ವ್ಯವಸ್ಥೆಯಾಗಲಿದೆ. ಸಾಂಪ್ರದಾಯಿಕ ಪಿನ್ ಕೋಡ್‌ಗಳು ವಿಶಾಲ ಪ್ರದೇಶವನ್ನು ಒಳಗೊಂಡಿದ್ದರೆ, 10-ಅಂಕಿಯ ಡಿಜಿಪಿನ್ ವ್ಯವಸ್ಥೆಯು ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ಪ್ರತಿನಿಧಿಸುತ್ತದೆ. ಪಿನ್ ಕೋಡ್ ಮತ್ತು ಡಿಜಿಪಿನ್ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ಕಂಡುಹಿಡಿಯೋಣ.ನಿಖರವಾದ ಸ್ಥಳವನ್ನು ಅರ್ಥಮಾಡಿಕೊಳ್ಳಲು ಭಾರತೀಯ ಅಂಚೆ ಇಲಾಖೆ ಡಿಜಿಪಿನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಡಿಜಿಪಿನ್ 10-ಅಂಕಿಯ ಡಿಜಿಟಲ್ ಕೋಡ್ ಆಗಿದೆ. ವಿಶಾಲ ಪ್ರದೇಶವನ್ನು ಒಳಗೊಂಡ ಸಾಂಪ್ರದಾಯಿಕ ಪಿನ್ ಕೋಡ್ ಬದಲಿಗೆ, ಡಿಜಿಪಿನ್ ನಿಖರವಾದ ಸ್ಥಳ ಮಾಹಿತಿಯನ್ನು ಒದಗಿಸುತ್ತದೆ. ಅಂದರೆ, ಈ ಡಿಜಿಪಿನ್ ನಿಮ್ಮ ಮನೆ ಅಥವಾ ವ್ಯವಹಾರದ ನಿಖರವಾದ ಸ್ಥಳವನ್ನು ನಿಮಗೆ ನೀಡುತ್ತದೆ. ಡಿಜಿಪಿನ್ ರಚಿಸಲು ಮತ್ತು ಕೋಡ್ ಅನ್ನು ಕಂಡುಹಿಡಿಯಲು ಗೊತ್ತುಪಡಿಸಿದ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮನೆಯನ್ನು ಕಂಡುಹಿಡಿಯಬಹುದು. ಡಿಜಿಪಿನ್‌ನ ಪ್ರಯೋಜನವೆಂದರೆ ಅದು ಪತ್ರವ್ಯವಹಾರವನ್ನು ಸರಿಯಾದ ಸ್ಥಳಕ್ಕೆ ತಲುಪಿಸುತ್ತದೆ ಮತ್ತು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಇಲಾಖೆಗಳಂತಹ ತುರ್ತು ಸೇವೆಗಳು ಸ್ಥಳವನ್ನು ಅರ್ಥಮಾಡಿಕೊಳ್ಳುವ ಮೂಲಕ ನಿಮ್ಮನ್ನು ನಿಖರವಾಗಿ ತಲುಪಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ದೂರದ ಸ್ಥಳಗಳಲ್ಲಿ ಡಿಜಿಪಿನ್ ಪ್ರಯೋಜನಕಾರಿಯಾಗಲಿದೆ ಎಂದು ಆಶಿಸಲಾಗಿದೆ.ಡಿಜಿಪಿನ್ ಪಾರ್ಸೆಲ್‌ಗಳನ್ನು ಸರಿಯಾದ ಸ್ಥಳಕ್ಕೆ ತಲುಪಿಸಲು ಸಾಧ್ಯವಾಗುತ್ತದೆ, ಪತ್ರವ್ಯವಹಾರ ಮಾತ್ರವಲ್ಲದೆ, ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೂ ಸಹ.ನಿಮ್ಮ ಡಿಜಿಪಿನ್ ಅನ್ನು ಹೇಗೆ ಕಂಡುಹಿಡಿಯುವುದು?ನಿಮ್ಮ ಡಿಜಿಪಿನ್ ಅನ್ನು ಹುಡುಕಲು ಸರ್ಕಾರಿ ವೆಬ್‌ಸೈಟ್ https://dac.indiapost.gov.in/mydigipin/home ಅನ್ನು ಸಿದ್ಧಪಡಿಸಲಾಗಿದೆ. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ನೀವು ಕಂಡುಕೊಂಡ ಸ್ಥಳವನ್ನು ಕ್ಲಿಕ್ ಮಾಡುವ ಮೂಲಕ, ನಿಮ್ಮ 10-ಅಂಕಿಯ ಡಿಜಿಪಿನ್ ಅನ್ನು ನೀವು ಕಂಡುಹಿಡಿಯಬಹುದು. ಡಿಜಿಪಿನ್ ಅನ್ನು ಇತರ ವಿಳಾಸ ವ್ಯವಸ್ಥೆಗಳಿಗಿಂತ ಭಿನ್ನವಾಗಿಸುವುದು ನಾಲ್ಕು ಮೀಟರ್ ತ್ರಿಜ್ಯದೊಳಗೆ ನಿಮ್ಮ ನಿಖರವಾದ ಸ್ಥಳವನ್ನು ನೀವು ತಿಳಿದುಕೊಳ್ಳಬಹುದು. ಇಂಡಿಯಾ ಪೋಸ್ಟ್ ಐಐಟಿ ಹೈದರಾಬಾದ್, NRSC ಮತ್ತು ISRO ಸಹಯೋಗದೊಂದಿಗೆ ಡಿಜಿಪಿನ್ ಎಂಬ ಜಿಯೋಕೋಡೆಡ್ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಡಿಜಿಪಿನ್ ಅನ್ನು ಆಫ್‌ಲೈನ್‌ನಲ್ಲಿಯೂ ಬಳಸಬಹುದು.

ಪ್ರಾದೇಶಿಕ ವಾರ್ತೆಗಳು

ಯು. ಆರ್.ಶೆಟ್ಟಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಮಂಗಳೂರು -ಸಮಾಜ ಸೇವಕ, ” ಕಲಾರತ್ನ ” ಕೋವಿಡ್ -19 ಸಂದರ್ಭದಲ್ಲಿ ಒಬ್ಬರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿದ ಸದಾ ಸಮಾಜಪರ ಚಿಂತಕ,ಸಂಘಟಕರಾಗಿರುವ ಯು. ಆರ್. ಶೆಟ್ಟಿಯವರಿಗೆ ಇಂದು ಹುಟ್ಟುಹಬ್ಬ.Mp mla*s News ಯು . ಆರ್.ಶೆಟ್ಟಿ ಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತದೆ.

Scroll to Top